‘ಪ್ರೀತಿ ಗೀತಿ ಇತ್ಯಾದಿ’ ಯು ಪತ್ರ
Posted date: 08 Thu, May 2014 – 09:21:49 AM

‘ಪ್ರೀತಿ ಗೀತಿ ಇತ್ಯಾದಿ’ ಚಿತ್ರವನ್ನು ಇತ್ತೀಚಿಗೆ ಸೆನ್ಸಾರ್ ಮಂಡಳಿ ವೀಕ್ಷಿಸಿ ಮುಕ್ತವಾಗಿ ಪ್ರಶಂಸಿಸಿ ಚಿತ್ರಕ್ಕೆ ‘ಯು’ ಅರ್ಹತಾ ಪತ್ರವನ್ನು ನೀಡಿದೆ. ೧೨೦ ನಿಮಿಷಗಳ ಸಂಪೂರ್ಣ ಮನರಂಜನೆ ಜೊತೆಗೆ ಸುಮಧುರವಾದ ಹಾಡುಗಳುಳ್ಳ ಈ ಚಿತ್ರವು ಸಧ್ಯದಲ್ಲಿ ಪ್ರೇಕ್ಷಕರ ಮುಂದೆ ಬರಲು ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ಬೆಳಗಾವಿ ಇಂದ ವಿಜಯಕುಮಾರ್ ಅವರು ಈ ಚಿತ್ರದ ನಿರ್ಮಾಪಕರು. ಯೋಗರಾಜ ಭಟ್ಟರ ಶಿಷ್ಯ ವೀರೇಂದ್ರ ಸ್ವತಂತ್ರ ನಿರ್ದೇಶಕರು. ‘ಪ್ರೀತಿ ಗೀತಿ ಇತ್ಯಾದಿ’ ಚಿತ್ರಕ್ಕೆ ಮುಂಬಯಿಯ ಸ್ಟುಡಿಯೋ ಒಂದರಲ್ಲಿ ಗ್ರೇಡಿಂಗ್ ಕೆಲಸವನ್ನು ಮಾಡಲಾಗಿದೆ.

ವೀರೇಂದ್ರ ಅವರ ನಿರ್ದೇಶನದಲ್ಲಿ ಎರಡು ೧೦೦ ದಿವಸಗಳ ಸಿನೆಮಾ ನಿರ್ದೇಶಕರಾದ ಪವನ್ ವಡೆಯರ್ (ಇವರು ಸಹ ಭಟ್ಟರ ಶಿಷ್ಯ)  ನಾಯಕರಾಗಿ ತೆರೆಯಮೇಲೆ ಬರುತ್ತಿದ್ದಾರೆ. ಪವನ್ ವಡೆಯರ್ ಅವರು ಈ ಸಿನೆಮಾದಲ್ಲಿ ಬಾರ್ ಒಂದರಲ್ಲಿ ಉದ್ಯೋಗಿ ಆಗಿ ಅಭಿನಯಿಸುತ್ತಿದ್ದಾರೆ.

ಮಾತಿನ ಭಾಗದ ಚಿತ್ರೀಕರಣ ಬೆಂಗಳೂರು, ಮೈಸೂರು, ತೀರ್ಥಹಳ್ಳಿ ಸ್ಥಳಗಳಲ್ಲಿ ಮಾಡಲಾಗಿದೆ.
ಕೇವಲ ಎಂಟು ಪಾತ್ರದಾರಿಗಳನ್ನು ಒಳಗೊಂಡ ಈ ‘ಪ್ರೀತಿ ಗೀತಿ ಇತ್ಯಾದಿ’ ಚಿತ್ರದ ನಾಯಕಿ ಸಂಗೀತ ಭಟ್.
ವೀರ ಸಮರ್ಥ ಅವರ ಸಂಗೀತವಿದೆ, ಭಾಸ್ಕರ್ ರೆಡ್ಡಿ ಅವರು ಛಾಯಾಗ್ರಾಹಕರು. ರಂಗಾಯಣ ರಘು, ವಿನಯಪ್ರಕಾಶ್, ಮಂಜುನಾಥ್ ಗೌಡ, ನಭ ನಟೇಶ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed